Adamya Chetana

Chinnara Chetana
ಚಿಣ್ಣರ ಚೇತನ

Chinnara Chetana:

Conceptualized in 2008, this colourful monthly wall magazine for school children carries thought provoking and informative articles related to environment, green lifestyle, etc. Published in both Kannada and English, it adorns the walls of hundreds of schools in Karnataka.

ಚಿಣ್ಣರ ಚೇತನ ಗೋಡೆ ಪತ್ರಿಕೆ :

ಶಾಲಾ ಮಕ್ಕಳಿಗಾಗಿ ೨೦೦೮ರಲ್ಲಿ ರೂಪಿತವಾದ ವರ್ಣರಂಜಿತ ಗೋಡೆ ಪತ್ರಿಕೆ. ಈ ಪತ್ರಿಕೆ ಕರ್ನಾಟಕದ ನೂರಾರು ಶಾಲೆಗಳ ಗೋಡೆಗಳನ್ನು ಅಲಂಕರಿಸುತ್ತಾ ಸಕಾರಾತ್ಮಕ ಸುದ್ದಿಯನ್ನು ಶಿಕ್ಷಕರಿಗೆ ಮತ್ತು ಮಕ್ಕಳಿಗೆ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ತಲುಪಿಸುತ್ತದೆ. ಪರಿಸರ, ಹಸಿರು ಜೀವನ ಶೈಲಿ ಮುಂತಾದ ವಿಚಾರ ಶಕ್ತಿಯನ್ನು ಪ್ರಚೋದಿಸಬಲ್ಲ ಮಾಹಿತಿಯುಕ್ತ ಗೋಡೆ ಪತ್ರಿಕೆಯಾಗಿದೆ.

ಚಿಣ್ಣರ ಚೇತನ ಗೋಡೆ ಪತ್ರಿಕೆ ಜುಲೈ ೨೩ರ ಸಂಚಿಕೆ ಬಿಡುಗಡೆ

ವಿಸ್ಮಯ ಹಾಗೂ ಕುತೂಹಲಕಾರಿ ಸಂಗತಿಗಳನ್ನು ಮಕ್ಕಳಿಗೆ ತಿಳಿಸುವ ಸದುದ್ದೇಶದೊಂದಿಗೆ ಅದಮ್ಯ ಚೇತನ ಸಂಸ್ಥೆಯು ಆರಂಭಿಸಿರುವ ‘ಚಿಣ್ಣರ ಚೇತನ’ ಎಂಬ ಬಹುವರ್ಣೀಯ ಗೋಡೆಪತ್ರಿಕೆಯು, ಬೆಂಗಳೂರಿನ ಸೌತ್ ಎಂಡ್ ಸರ್ಕಲ್‌ ನಲ್ಲಿರುವ ಅನಂತ ಪ್ರೇರಣಾ ಕೇಂದ್ರದಲ್ಲಿ ಜುಲೈ 13ರಂದು ಮಧ್ಯಾಹ್ನ ಅರ್ಥಪೂರ್ಣ ವಾಗಿ ಅನಾವರಣಗೊಂಡಿತು. ವಿಜಯ ವಿದ್ಯಾಲಯ ಸಂಸ್ಥೆಗಳ ಸಮೂಹಗಳ ಮುಖ್ಯಸ್ಥ ಶ್ರೀ ರಘುನಂದನ್ ಅವರು ಚಿಣ್ಣರ ಚೇತನ ಗೋಡೆಪತ್ರಿಕೆಯನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಹಿರಿಯ ಲೇಖಕರು ಹಾಗೂ ಪತ್ರಿಕೆ ಸಂಪಾದಕರಾದ ಶ್ರೀ ನಾಗೇಶ್ ಹೆಗಡೆ, ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್, ಶ್ರೀ ಟಿ ಎಸ್‌ ಗೋಪಾಲ್‌, ಜಿ ಎಂ ಇನಾಂದಾರ್‌, ಸಂಸ್ಥೆಯ ಕಾರ್ಯಕರ್ತರು ಮೊದಲಾದವರು ಉಪಸ್ಥಿತರಿದ್ದರು. ಈ ಸಮಾರಂಭವು ಅಂತರ್ಜಾಲದಲ್ಲೂ ನೇರ ಪ್ರಸಾರಗೊಂಡಿತು.
ಈ ಕಾರ್ಯಕ್ರವನ್ನು ವೀಕ್ಷಿಸಲು :https://www.youtube.com/watch?v=MDK-WJtHoN4
 

ಅದಮ್ಯ ಚೇತನ ಸಂಸ್ಥೆಯು ಪ್ರತಿ ತಿಂಗಳು ವಿನೂತನವಾಗಿ ಪ್ರಕಟಿಸುವ ʻಚಿಣ್ಣರ ಚೇತನʼ ಗೋಡೆಪತ್ರಿಕೆಯನ್ನು ಬೆಂಗಳೂರಿನ ಎಚ್‌.ಎಸ್‌.ಆರ್‌. ಲೇಔಟ್‌ನಲ್ಲಿಒರುವ ಆಕ್ಸ್‌ಫರ್ಡ್‌ ಕಾಲೇಜಿನಲ್ಲಿ ಶುಕ್ರವಾರದಂದು (ಆ.11) ಬಿಡುಗಡೆಗೊಳಿಸಲಾಯಿತು. ಎನ್‌.ಡಿ.ಆರ್‌ ಐ ಮಾಜಿ ನಿರ್ದೇಶಕ ಕೆ.ಪಿ. ರಮೇಶ್‌, ಬಿಬಿಎಂಪಿ ಕಾರ್ಪೋರೇಟರ್‌ ಶ್ರೀ ಗುರುಮೂರ್ತಿ ರೆಡ್ಡಿ, ಆಕ್ಸ್‌ ಫರ್ಡ್‌ ಕಾನೂನು ಕಾಲೇಜು ಪ್ರಾಚಾರ್ಯ ಡಾ. ಪ್ರಜ್ಞಾ ಪಾಟೀಲ್‌, ವಿಜ್ಞಾನ ಕಾಲೇಜು ಪ್ರಾಚಾರ್ಯ ಡಾ. ಕಾವ್ಯಶ್ರೀ, ವ್ಯವಹಾರ ನಿರ್ವಹಣಾ ಕಾಲೇಜಿನ ಪ್ರಾಚಾರ್ಯ ಡಾ. ನಿಕಿತಾ ಆಲೂರು, ಕಲಾ ಕಾಲೇಜಿನ ಪ್ರಾಚಾರ್ಯ ಶ್ರೀಮತಿ ಗಾಯತ್ರಿ, ಅದಮ್ಯ ಚೇತನ ಸಂಸ್ಥೆ ಅಧ್ಯಕ್ಷೆ ಶ್ರೀಮತಿ ತೇಜಸ್ವಿನಿ ಅನಂತಕುಮಾರ್‌, ಬಿಜೆಪಿ ಮಹಿಳಾ ಮೋರ್ಚಾ (ಬೆಂಗಳೂರು ದಕ್ಷಿಣ) ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಇತರೆ ಗಣ್ಯರಿದ್ದರು. ಪರಿಸರವಾದಿ ಚಿಂತಕ ನಾಗೇಶ ಹೆಗಡೆ ಅವರು ಅಂತರ್ಜಾಲದ ಮೂಲಕ ಗೋಡೆ ಪತ್ರಿಕೆಯ ವಿಶೇಷತೆ ಕುರಿತು ಮಾತನಾಡಿದರು.

ಅದಮ್ಯ ಚೇತನ ಸಂಸ್ಥೆಯ ಹೆಮ್ಮೆಯ ಯೋಜನೆ ʻಚಿಣ್ಣರ ಚೇತನʼ ಸೆಪ್ಟೆಂಬರ್‌ ತಿಂಗಳ ಗೋಡೆಪತ್ರಿಕೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಷಿ ಹಾಗೂ ಕನ್ನಡ ಸಿನಿಮಾ ನಟಿ ಪೂಜಾಗಾಂಧಿ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಪಂಪ ಸಭಾಂಗಣದಲ್ಲಿ ಸೆ. 12ರಂದು ಬಿಡುಗಡೆ ಮಾಡಿದರು. ಮಕ್ಕಳ ಮನೋವಿಕಾಸಕ್ಕೆ ಪೂರಕವಾಗುವ ಗೋಡೆಪತ್ರಿಕೆಯ ಮೂಲಕ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿರುವ ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಹಾಗೂ ಅದಮ್ಯ ಚೇತನ ಸಂಸ್ಥೆಯ ಕಳಕಳಿಯನ್ನು ಪ್ರಶಂಸಿಸಿದರು. ಈ ಸಂದರ್ಭದಲ್ಲಿ ಕ. ಸಾ. ಪ. ಗೌರವ ಕಾರ್ಯದರ್ಶಿ ಶ್ರೀ ರಾಮಲಿಂಗ ಶೆಟ್ಟಿ, ಗಣ್ಯರಾದ ಶ್ರೀ ಜಿ.ಎಂ. ಇನಾಂದಾರ್‌, ಶ್ರೀ ಕುಮಾರಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.